ಚಿಕ್ಕಮಗಳೂರು
From Wikipedia
ಚಿಕ್ಕಮಗಳೂರು ಕರ್ನಾಟಕ ರಾಜ್ಯದ ಒಂದು ನಗರ ಮತ್ತು ಅದೇ ಹೆಸರಿನ ಜಿಲ್ಲಾ ಕೇಂದ್ರ. ಇದು ಬೆಂಗಳೂರಿನಿಂದ ೨೫೧ ಕಿಮೀ ದೂರದಲ್ಲಿದೆ. ಇದು ಕಾಫಿ ತೋಟಗಳಿಗೆ ಹೆಸರುವಾಸಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ೭ ತಾಲೂಕುಗಳನ್ನು ಒಳಗೊಂಡಿದೆ.
ಪರಿವಿಡಿ |
[ಬದಲಾಯಿಸಿ] ಪ್ರವಾಸಿ ತಾಣಗಳು
[ಬದಲಾಯಿಸಿ] ಕೆಮ್ಮಣ್ಣುಗುಂಡಿ ಮತ್ತು ಕಲ್ಹತ್ತಿಗಿರಿ
ಕೆಮ್ಮಣ್ಣುಗುಂಡಿ ಚಿಕ್ಕಮಗಳೂರಿನ ಸಮೀಪದಲ್ಲಿರುವ (೫೫ ಕಿಮೀ)ಒಂದು ಗಿರಿಧಾಮ. ಸಹ್ಯಾದ್ರಿ ಪರ್ವತಶ್ರೇಣಿಯ ಎತ್ತರದ ಶಿಖರಗಳು ಸಹ ಇದರ ಸುತ್ತಮುತ್ತಲಲ್ಲೇ ಇವೆ. ಇಲ್ಲಿ ಮಾಣಿಕ್ಯಧಾರಾ ಜಲಪಾತವಿದೆ. ಕೆಮ್ಮಣ್ಣುಗುಂಡಿ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿದೆ.
ಕೆಮ್ಮಣ್ಣುಗುಂಡಿಯ ಸಮೀಪದಲ್ಲೇ ಇರುವ ಇನ್ನೊಂದು ಪ್ರವಾಸಿ ಆಕರ್ಷಣೆ ಕಲ್ಹತ್ತಿಗಿರಿ ಜಲಪಾತ.
[ಬದಲಾಯಿಸಿ] ಮುಳ್ಳಯ್ಯನಗಿರಿ
ಕರ್ನಾಟಕ ಅತಿ ಎತ್ತರದ ಗಿರಿಶಿಖರ.ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠವಿದೆ.ಚಾರಣಿಗರಿಗೆ ಮುಳ್ಳಯ್ಯನಗಿರಿ ಪ್ರಶಸ್ತವಾದ ಸ್ಥಳ.ಚಿಕ್ಕಮಗಳೂರಿನಿಂದ ಬೆಟ್ಟದ ಬುಡಕ್ಕೆ ಬಸ್ ಸೌಕರ್ಯ ಇದೆ.ತದನಂತರ "ಸರ್ಪನ ದಾರಿ" ಕರೆಯಲಾಗುವ ಕಡಿದಾದ ಕಾಲುಹಾದಿಯಲ್ಲಿನಡೆದು ಬೆಟ್ಟದ ತುದಿ ತಲುಪಬೇಕು. ಮುಳ್ಳಯ್ಯನ ಗಿರಿಯ ಮೇಲಿನಿಂದ ಸಿಗುವ ವಿಹಂಗಮ ನೋಟ ಅತ್ಯಂತ ಆಹ್ಲಾದಕರ.
[ಬದಲಾಯಿಸಿ] ಶೃಂಗೇರಿ
ನೋಡಿ: ಶೃಂಗೇರಿ
ಶೃಂಗೇರಿ ಪಟ್ಟಣ ಬಹಳ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಅದ್ವೈತ ಮಠಗಳಲ್ಲಿ ಮೊದಲನೆಯದು ಇರುವುದು ಇಲ್ಲಿಯೇ. ಇಲ್ಲಿರುವ ವಿದ್ಯಾಶಂಕರ ದೇವಸ್ಥಾನ ಖ್ಯಾತವಾದದ್ದು. ಈ ದೇವಸ್ಥಾನದ ಸುತ್ತಲೂ ಇರುವ ಹನ್ನೆರಡು ಕಂಬಗಳಲ್ಲಿ ಪ್ರತಿಯೊಂದರ ಮೇಲೆಯೂ ಬೇರೆ ಬೇರೆ ತಿಂಗಳುಗಳಲ್ಲಿ ಸೂರ್ಯರಶ್ಮಿ ಬೀಳುತ್ತದೆ!
[ಬದಲಾಯಿಸಿ] ಭದ್ರಾ ಅಭಯಾರಣ್ಯ
ಲಕ್ಕವಳ್ಳಿಯ ಬಳಿ ಭದ್ರಾ ನದಿಗೆ ಕಟ್ಟಿರುವ ಅಣೆಕಟ್ಟಿನ ಸುತ್ತಲೂ ಇರುವ ಅಭಯಾರಣ್ಯ.
[ಬದಲಾಯಿಸಿ] ಇತರ ಪಟ್ಟಣಗಳು
ಚಿಕ್ಕಮಗಳೂರು ಜಿಲ್ಲೆಯ ಕೆಲ ಇತರ ಮುಖ್ಯ ಪಟ್ಟಣಗಳೆಂದರೆ ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ,ಮೂಡಿಗೆರೆ, ತರೀಕೆರೆ.