ರಾಗಿ ಮುದ್ದೆ
From Wikipedia
ರಾಗಿ ಮುದ್ದೆ ಕರ್ನಾಟಕದ ಒಂದು ಮುಖ್ಯ ಆಹಾರ. ಶ್ರಮಜೀವಿಗಳು ಮತ್ತು ಗ್ರಾಮಾಂತರ ಪ್ರದೇಶಗಳ ಜನರು ಹೆಚ್ಚಾಗಿ ಇದನ್ನು ಉಪಯೋಗಿಸುತ್ತಾರೆ. ರಾಗಿಹಿಟ್ಟಿನಿಂದ ತಯಾರಿಸುವ ಈ ಆಹಾರ ಆರೋಗ್ಯಕರವೆಂದು ಪರಿಗಣಿಸಲ್ಪಟ್ಟಿದೆ. "ಹಿಟ್ಟು ತಿಂದು ಗಟ್ಟಿಯಾಗು" ಎಂಬ ಗಾದೆ ರಾಗಿಮುದ್ದೆಯ ಮಹತ್ವವನ್ನು ಸಾರುತ್ತದೆ.
ನಮ್ಮ ಮಾಜೀ ಪ್ರಧಾನಿ, ಶ್ರೀ ದೇವೇಗೌಡರು, ರಾಗಿ-ಮುದ್ದೆ ಊಟವನ್ನು ಪ್ರತಿದಿನ ಮಾಡುತ್ತಾರೆ. ಅವರು ಪರದೇಶಕ್ಕೆ ಹೋದಾಗಲು ತಮ್ಮ ಅಡುಗೆಯವರನ್ನು ಕರೆದುಕೊಂಡುಹೋಗಿದ್ದರು. ಮತ್ತು ಅಲ್ಲಿಯೂ ತಪ್ಪದೆ ರಾಗಿ-ಮುದ್ದೆ ಊಟವನ್ನು ಬಿಡದೆ ಮಾಡಿದ್ದರು. ನಮ್ಮ ಪ್ರೀತಿಯ ಚಿತ್ರನಟ, ದಿ.ಡಾ.ರಾಜ್ಕುಮಾರ್ ರವರೂ ರಾಗಿ-ಮುದ್ದೆಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು.