ಮಾತೆ ಮಹಾದೇವಿ
From Wikipedia
ಗುರು ಲಿಂಗಾನಂದರವರಿಂದ ಪ್ರಭಾವಿತರಾಗಿ, ಕಿರಿಯ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ, "ಪ್ರಥಮ ಮಹಿಳಾ ಜಗದ್ಗುರು" ಎಂದು ತಮ್ಮ ಭಕ್ತರಿಂದ ಗುರುತಿಸಲ್ಪಡುವ ಮಾತೆ ಮಹಾದೇವಿ, ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದಾರೆ. ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಶರಣ ಸಮ್ಮೇಳನವನ್ನು ಪ್ರತಿ ವರ್ಷ ನೆಡೆಸುತ್ತಿದ್ದಾರೆ. ಆದರೆ ಬಸವ ವಚನ ಅಂಕಿತವನ್ನು ಕೂಡಲ ಸಂಗಮ ದೇವವೆನ್ನುವ ಬದಲಾಗಿ ಲಿಂಗದೇವ ಎಂದು ಪರಿಗಣಿಸಬೇಕೆಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದಾರೆ.